ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜನವರಿ, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನರಬೇಕಷ್ಟೆ

ನರಬೇಕಷ್ಟೆ  ಏಳಿ ಎದ್ದೇಳಿ ಮೂಢ ಜನರೆ ನಿಮ್ಮ ಬಾಗಿದ ಬೆನ್ನ ಸೆಟೆದು ನಿಲ್ಲಿ ಬಾಗಿ ಬೆಂಡಾಗಿರುವ ನಿಮ್ಮ ಬೆನ್ನ ಮೇಲೆ ಚಾದರವನ್ನು ಹಾಸಿರುವರು ನಿಮ್ಮ ತೂತು ಚೋಬಿನಿಂದ ಉದುರಿದ ಚಿಲ್ಲರೆ ಹಾಯ್ದು ನಿಮಗೆ ಕೊಟ್ಟಿರುವರು ಹಾಯ್ದು ಕೊಡುವ ನಾಚಿಗೆಡು ಆಟದಲ್ಲಿ ನಿಮ್ಮ ಶ್ರಮದ ಹಣವನ್ನು ಅವರೇ ನುಂಗಿರುವರು ಹಾಸಿರುವ ಚಾದರದ ಮೇಲೆ ಅದೇ ಹಣವನ್ನು ಎಲೆ ಆಟದಲ್ಲಿ ಪಣಕ್ಕಿಟ್ಟು ಜೂಜಾಡುತಿರುವರು ಸೋತು ಗೆದ್ದು ಕೊಚ್ಚೆ ಎರಚಾಡಿ ಹೊಡೆದಾಡಿ ಬಡಿದಾಡಿ ಒಂದಾಗಿ ಅವರವರಲ್ಲೆ ಹಣವನ್ನು ಹಂಚಿಕೊಡಿರುವರು ಜಾತಿ ಪಾತಿ ಅಂತಸ್ತು ಗಿಂತಸ್ತಿನ ಬಣ್ಣ ಗಿಣ್ಣಗಳ ಗೋಜಿಗೊಗಬೇಡಿ ಎದ್ದು ನಿಲ್ಲಲು ನರಬೇಕಷ್ಟೆ ಇನ್ನೇನಿಲ್ಲ ಎದ್ದು ನಿಲ್ಲಿ ಬೆನ್ನ ಮೇಲೆ ನಡೆಯುತ್ತಿರುವ ಕಣ್ಣಿಗೆ ಕಾಣದಿರುವ ಸ್ವಾರ್ಥ ಚದುರಂಗ ಇಲ್ಲವಾಗಿಸಿ ಬರವಣಿಗೆ: ಮಂಜುನಾಥ ಎಂ ಆರ್

ಚಕ್ರ

     ೧     ನೂರು ವರುಷದ ಜೀವನದಲ್ಲಿ ಏನಾದ್ರೂ ಬರ್ಲಿ, ಹೋಗ್ಲಿ, ಉಳಿಲಿ; ನಂಗೆ ಇಂದಿನ ಆಟವೇ ಮುಖ್ಯವೆಂದು ಆಡುತಿರುವ ಹುಡ್ಗ ನಾನು. ಉದಯ ಕಾಲದ ಹೋಕಳಿ ಮುಗಿಸಿ, ಮಲ್ಲಿಗೆಯ ಸ್ಪರ್ಶದಂತಿರುವ ಶಾಖವನ್ನು ನೀಡುತ್ತಿರುವ ರವಿ, ಈಗತಾನೆ ಬೆಳಗಲು ಆರಂಭಿಸಿದ್ದಾನೆ. ನಾನು ಸಹ ನನ್ನ ಆಟವನ್ನು ಆರಂಭಿಸುತ್ತಿರುವೆ - ಒಂದು ಖಾಲಿ ಮೈದಾನದಲ್ಲಿ. ದ್ದೊರದಲಿ ನನ್ನ ತಂದೆ ನನ್ನನೇ ದಿಟ್ಟಿಸಿ ನೋಡುತ್ತಿರುವನು, ಹತಾಶೆಯಿಂದ. ನನ್ನ ಆಟದ ಮೇಲಿರುವ ಬೇಸರವೊ ಅಥವಾ ಮತ್ಯಾವ ಚಿಂತೆಯೋ? ಅದು ನನಗೆ ಬೇಡದ ವಿಷಯ. ಆಡಲು ತಂದಿರುವ ಚೆಂಡಷ್ಟೇ ನನ್ನ ಪ್ರಿಯ ವಸ್ತು. ನನ್ನ ಹಿಂದಿರುವ ನನ್ನ ತಾಯಿ ಮಾತುಗಳು ನನ್ನ ಆಟದ ದಿಕ್ಕನ್ನು ಬಡಲಿಸಿದವು. ಅಮ್ಮ ಹೇಳಿದಳು:  ಮಧ್ಯಾಹ್ನದ ಸೂರ್ಯ ಬಹಳ ಕ್ರೂರಿ; ತಲೆಯೆತ್ತಿ ನಡೆದರೆ ಕಣ್ಣುಕುಕ್ಕುವನು, ನಿಂತರೆ ತಲೆಬಿಸಿ ಮಾಡುವನು, ಬಗ್ಗಿ ನಡೆದರೆ ಬೆನ್ನ ಮೇಲೆ ಬರೆ ಎಳೆಯುವನು.     ಈ ಮಾತುಗಳ ಕೇಳಿದಾಗ ನನಗೆ ಒಂದು ಮಹತ್ವಾಕಾಂಕ್ಷೆಯ ಗುರಿ ಸಿಕ್ಕಿತು - ಚೆಂಡನ್ನು ತೂರಿ, ಬಂದಿರುವ ಸೂರ್ಯನನ್ನು ಕೆಡವಿ ದೂರದೂರಕ್ಕೆ ಓಡಿಸಿ ಚಂದ್ರನನ್ನು ತರಬೇಕು. ಅಜ್ಜ ಹೇಳಿದ್ದ ಸೂರ್ಯ ಇಲ್ಲವೆಂದರೆ ತಂಪಾದ ಚಂದ್ರ ಬರುವನೆಂದು. ತೂರಿದೆ ಚೆಂಡನ್ನು; ಮೇಲಕ್ಕೆ-ಮೇಲಕ್ಕೆ ಹೋಯಿತು ಕಾಣದಂತೆ ಮಾಯವಾಯಿತು. ಗಾಬರಿಗೊಂಡ ನಾನು ತಂದೆಯ ಬಳಿ ಓಡಿ ಹೋದೆ. ನನ್ನ ಅಪ್ಪ ಹೇಳಿದರು: ...